Home » ಲೈವ್ ನ್ಯೂಸ್ » ಕಾನೂನು ದುರುಪಯೋಗ ತಡೆ ಅನಿವಾರ್ಯ: ಪಾಟೀಲ

ಕಾನೂನು ದುರುಪಯೋಗ ತಡೆ ಅನಿವಾರ್ಯ: ಪಾಟೀಲ

ಭಾಲ್ಕಿ.16.ಮಾರ್ಚ್.26: ಕಾನೂನು ದುರುಪಯೋಗ ತಡೆಗಟ್ಟುವುದು ಅನಿವಾರ್ಯವಾಗಿದೆ ಎಂದು ಖಟಕಚಿಂಚೋಳಿ ಠಾಣೆಯ పిఎనోఐ ಪ್ರಭಾಕರ ಅಭಿಪ್ರಾಯಪಟ್ಟರು.

ರವಟ್ಟಿ(ಬಿ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಹಾರಾ ರೂರಲ್ ಡೆವಲೆಪಮೆಂಟ್ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಆಸ್ಪೃಶ್ಯತೆ ನಿವಾರಣೆ ಮತ್ತು ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ನಡೆದ ಕೋಮು ಸೌಹಾರ್ದತೆಯ ಅರಿವು ಮೂಡಿಸುವ.



ಭಾಲ್ಕಿ: ವರವಟ್ಟಿ(ಬಿ) ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಅರಿವು ಕಾರ್ಯಕ್ರಮದಲ್ಲಿ ಪಿಎಸ್ ಐ ಪ್ರಭಾಕರ ಪಾಟೀಲ ಮಾತನಾಡಿದರು.

ಕಾರ್ಯಕ್ರಮದ ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು. ದೇಶದ ಕಾನೂನಿಗೆ ಗೌರವ ಕೊಡುವ ಕಾರ್ಯವಾಗಬೇಕು. ನೂರು ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ

ಪರವಾಗಿಲ್ಲ. ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವುದು ನಮ್ಮ ಧೇಯವಾಗಿದೆ ಎಂದು ಹೇಳಿದರು.

ಗ್ರಾಪಂ ಕಾರ್ಯದರ್ಶಿ ರೇಖಾ ಕಾರ್ಯಕ್ರಮ ಉದ್ಘಾಟಿಸಿದರು.

ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶಿವಾನಂದ ಜಾಗಿರದಾರ ಅಧ್ಯಕ್ಷತೆ ವಹಿಸಿದ್ದರು. ಸಹರಾ ರೂರಲ್ ಡೆವಲಪಮೆಂಟ ಮತ್ತು ಎಜುಕೇಶನ ಸೂಸೈಟಿ ಅಧ್ಯಕ್ಷೆ ಕವಿತಾ ಮಚಕೂರೆ ಮಾತನಾಡಿದರು.

ಇದೇ ವೇಳೆ ಮಹಾಂತೇಶ ಮತ್ತು ನಾಗಯ್ಯ ಸ್ವಾಮಿ ಕಲಬುರಗಿ ಕಲಾ ತಂಡದವರಿಂದ ಅರಿವಿನ ಹಾಡುಗಳು ಹಾಗೂ ಬೀದಿನಾಟಕ ಮಾಡಲಾಯಿತು.

ಪ್ರೌಢಶಾಲೆ ಮುಖ್ಯಶಿಕ್ಷಕಿ ಶಾಂತಾಬಾಯಿ ಸಜ್ಜನ ಶಿವಾನಂದ ಜಾಗಿರದಾರ, ಮುಖ್ಯಶಿಕ್ಷಕ ದಯಾನಂದ, ನಿವೃತ್ತ ಶಿಕ್ಷಕ ಪ್ರದೀಪ ಮುರುಗ, ವಾಮನ ಭವರಾವ ಉಪಸ್ಥಿತರಿದ್ದರು.

Author

ಪ್ರಮುಖ ಸುದ್ದಿ

Stock market

Astrology